ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮಾರ್ಚ್ 8, 2012

ತಲೆ ಮಾತ್ರ ಬಾಗದಿರಲಿ, ಅನ್ಯಾಯದೆದುರು ಧಾತಾ

     ಪ್ರತಿ ಶನಿವಾರದಂದು ಸಾಯಂಕಾಲ 5-30ಕ್ಕೆ ಸರಿಯಾಗಿ ಬೆಂಗಳೂರಿನ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಸತ್ಸಂಗವಿರುತ್ತದೆ. ಆ ಸಂದರ್ಭದಲ್ಲಿ ಅಗ್ನಿಹೋತ್ರ, ಭಜನೆ ಮತ್ತು ಪಂಡಿತರಿಂದ ಸುಮಾರು 45 ನಿಮಿಷಗಳ ಕಾಲ ಉಪನ್ಯಾಸವಿರುತ್ತದೆ. ಆಸಕ್ತರು ಭಾಗವಹಿಸಬಹುದು. ಅಲ್ಲಿ ಹಾಡಲಾದ ಒಂದು ಭಜನೆಯನ್ನು ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಭಜನೆಯ ಸಾಹಿತ್ಯವನ್ನೂ ಇಲ್ಲಿ ಕೊಟ್ಟಿರುವೆ. ನಿಮಗೆ ಇಷ್ಟವೆನಿಸಿದರೆ ಸಂತೋಷ.
-ಕ.ವೆಂ.ನಾಗರಾಜ್.



ಜ್ಯೋತೀಸ್ವರೂಪ ಭಗವನ್| ಆ ದಿವ್ಯಜ್ಯೋತಿ ನೀಡು|
ಈ ತಿಮಿರ ರಾಶಿ ಹರಿದು| ಮನವಾಗೆ ಬೆಳಕ ಬೀಡು || ೧ ||
ಪ್ರಾಸಾದ ಕುಟಿಗಳಲ್ಲಿ| ಧನಿ ದೀನರಲ್ಲಿ ದೇವ|
ವೈಶಮ್ಯ ದ್ವಂದ್ವದಲ್ಲಿ| ನೀಡೆಮಗೆ ಸಾಮ್ಯಭಾವ || ೨ ||
ನರರೆಲ್ಲ ಸರಿಸಮಾನ| ಎಂಬೀ ಪ್ರಬುದ್ಧ ಭಾವ|
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩ ||
ದೀನರ್ಗೆ ನೋವನಿತ್ತು| ಸಂಪತ್ತ ಗಳಿಸದಂತೆ|
ನೀ ನೀಡು ಶುದ್ಧಮತಿಯಾ| ಪರಹಿಂಸೆಗೆಳೆಸದಂತೆ || ೪ ||
ಮನದಲ್ಲಿ ಮಾತಿನಲ್ಲಿ| ಮೈಯಲ್ಲಿ ಸತ್ಯ ಮಾತ್ರ|
ಮೊನೆವಂತೆ ಆತ್ಮಬಲವ| ನೀಡೈ ಜಗದ್ವಿಧಾತ್ರ || ೫ ||
ಸಲೆ ಕಷ್ಟಕೋಟಿ ಬರಲಿ| ನಮಗಾದರಾತ್ಮಧಾತಾ|
ತಲೆ ಮಾತ್ರ ಬಾಗದಿರಲಿ| ಅನ್ಯಾಯದೆದುರು ಧಾತಾ || ೬ ||
ಪಾಪಾಚರಣ ವಿರಕ್ತಿ| ಜೀವಾತ್ಮರಲನುರಕ್ತಿ|
ತಾಪಾಪಹಾರ ಶಕ್ತಿ| ನೀಡೆಮಗೆ ನಿನ್ನ ಭಕ್ತಿ || ೭ ||
ಬಾಧಾ ಕಠೋರ ಕ್ಲೇಶ| ಪ್ರತಿನಿತ್ಯ ಸಹಿಪೆವಾವು|
ವೇದೋಕ್ತ ಧರ್ಮ ಮಾತ್ರ| ಬಿಡೆವಡಸಿದೊಡೆಯೆ ಸಾವು || ೮ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ